ಮನಸಿನೊಳಗಿನ ಕುಸುಕುಸು…..

ಒಂದು ಮನಸು ನೂರು ಕನಸು

ಬ್ರಾಹ್ಮಿ ಆಯುರ್ವೇದ ಚಿಕಿತ್ಸಾಲಯ ಉದ್ಘಾಟನೆಯ ಕರೆಯೋಲೆ

ನಮಸ್ತೆ….

ನಾಲ್ಕು ವರ್ಷದ ಹಿಂದೆ ವಿಜಯನಗರದಲ್ಲಿ  ಸುಕೃತಂ ಆಯುರ್ವೇದ ಆರಂಭವಾದಾಗ ನಾಲ್ಕು ವರ್ಷ ತುಂಬುವ ಮೊದಲೇ ಹೀಗೆ ಒಂದಷ್ಟು ಚಿಕಿತ್ಸಾಲಯಗಳನ್ನು ತೆರೆಯಬೇಕು ಎಂಬ ಕನಸಿತ್ತು. ಈಗದು ಸಾಕಾರ ಆಗಿದೆ. ಬನ್ನೇರುಘಟ್ಟ ರಸ್ತೆ ಅರಕೆರೆ ಬಳಿ ಬ್ರಾಹ್ಮಿ ಆಯುರ್ವೇದ ಚಿಕಿತ್ಸಾಲಯ ಪ್ರಾರಂಭ ಆಗುತ್ತಿದೆ. ಮಿತ್ರರಾದ ಮಧುರೇಶ್ ಜತೆ ಸೇರಿ ಆರಂಭಿಸುತ್ತಿದ್ದೇವೆ. ಉದ್ಘಾಟನೆಯ  ಕರೆಯೋಲೆ ಇದರೊಂದಿಗಿದೆ… ಬೆಳಗ್ಗೆ ಹತ್ತು ಘಂಟೆಯಿಂದ ಸಂಜೆ ಐದು ಘಂಟೆಯೊಳಗೆ ನಿಮಗೆ ಅನುಕೂಲವಾಗುವ ಯಾವುದೇ ಸಮಯದಲ್ಲಿ ಬರಬಹುದು… ದಯವಿಟ್ಟು ಬನ್ನಿ ….. ಖುಷಿಗೆ ಸಾಥ್ ಕೊಡಿ….
ಏನೇನಿದೆ : ಖಾಯಿಲೆಗಳಿಗೆ ಔಷಧಗಳು ಮಾತ್ರವಲ್ಲ….ಆರೋಗ್ಯ ಸಂಬಂಧಿ ತೊಂದರೆಗಳಿದ್ದಲ್ಲಿ ಪ್ರತಿ ದಿನ ವೈದ್ಯರು ಇರುತ್ತಾರೆ…
ನಮ್ಮ ಬೈಕು, ಕಾರುಗಳನ್ನು ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡಿಸುತ್ತೇವಲ್ಲ, ಹಾಗೆ ನಮಗಾಗಿ ಗೆಯ್ಮೆ ಮಾಡುವ ದೇಹಕ್ಕೆ ಏನೂ ಬೇಡವೇ …. ಅದಕ್ಕಾಗಿಯೇ ತೈಲಾಭ್ಯಂಗ (Body Massage), ಶಿರೋಧಾರಾ ಮುಂತಾದ rejuvination ಸೌಲಭ್ಯಗಳಿವೆ.. ಇವುಗಳನ್ನು ಆರೋಗ್ಯವಾಗಿ ಇರುವವರೂ ಮಾಡಿಸಿಕೊಳ್ಳಬಹು … ಸುಮ್ಮನೆ ಬೋರ್ ಅನ್ನಿಸಿದಾಗಲೂ ಬರಬಹುದು… ಖುಷಿ ಅನಿಸಿದಾಗಲೂ ಬರಬಹುದು…
ಈ ಮಾತುಗಳೆಲ್ಲ ಹಾಗಿರಲಿ.. ನಾಡಿದ್ದು ಭಾನುವಾರ (11-12-2011) ರಂದು ಉದ್ಘಾಟನೆಗೆ ತಪ್ಪದೆ ಬಂದು ಹೋಗಿ… ಬೆಳಗ್ಗೆ ಹತ್ತರಿಂದ ಸಂಜೆ ಐದು ಘಂಟೆಯೊಳಗೆ ನಿಮ್ಮ ಅನುಕೂಲದ ಸಮಯದಲ್ಲಿ ಬನ್ನಿ.. ಇವೆಲ್ಲ ಭೇಟಿಗೊಂದು ನೆಪಗಳು… ಖಂಡಿತ ಬನ್ನಿ..

ಬ್ರಾಹ್ಮಿ ಆಯುರ್ವೇದ ಚಿಕಿತ್ಸಾಲಯ ಉದ್ಘಾಟನೆಯ ಕರೆಯೋಲೆ

December 6, 2011 Posted by | ಆಯುರ್ವೇದ | , | Leave a Comment

   

Follow

Get every new post delivered to your Inbox.